ಈ ಯೋಜನಯಡಿಯಲ್ಲಿ ಹಿರಿಯನಾಗರಿಕರಿಗೆ ₹1,200 ರೂಪಾಯಿ ಕೂಡ ಬ್ಯಾಂಕ್ ಖಾತೆಗೆ ಜಮೆ! ಅರ್ಜಿ ಈಗಲೇ ಸಲ್ಲಿಸಿ.

ಇಂದು ಮಹಿಳೆಯರಿಗೆ ರಾಜ್ಯ ಸರಕಾರವು ₹2000 ಸಾವಿರ ರೂ. ಗಳನ್ನು ನೀಡುತ್ತಾ ಇದೆ. ಹೌದು ಗೃಹಲಕ್ಷ್ಮಿ ಯೋಜನೆಯ ₹2000 ರೂ. ಜೊತೆಗೆ ₹1,200 ರೂ. ಗಳನ್ನ ಕೂಡ ಸರ್ಕಾರ ಹಿರಿಯನಾಗರಿಕರ ಖಾತೆಗೆ ಜಮೆ ಮಾಡಲಿದೆ. ಇಂದು ಸರ್ಕಾರವು ಕೃಷಿಕರಿಗೆ ಹಾಗೂ ಮಹಿಳೆಯರಿಗೆ, ಅದರಲ್ಲೂ ಬಡವರ್ಗದ ಜನತೆಗೆ ಹೀಗೆ ಎಲ್ಲಾ ವರ್ಗದ ಜನರಿಗೆ ಆರ್ಥಿಕವಾಗಿ ಸಹಾಯವನ್ನು ಸರಕಾರ ನೀಡುತ್ತಲೇ ಬಂದಿದೆ. ಅದರಲ್ಲೂ ಹಿರಿಯರಿಗೆ ನೇರವಾಗುವಂತೆ ಸರಕಾರವು ಮಾಸಿಕ ಪಿಂಚಣಿ ಯೋಜನೆ ಅಂದರೆ (Monthly Pension Scheme) ಅನ್ನು ಕೂಡ ರೂಪಿಸಿದೆ. ಈ ಯೋಜನೆಯ ಅಡಿಯಲ್ಲಿ ವೃದ್ಧ ಪುರುಷರಿಗೆ ಮತ್ತು ವೃದ್ಧ ಮಹಿಳೆಯರಿಗೂ ಕೂಡ ತಿಂಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಹಾಗಿದರೆ ಈ ಯೋಜನೆ ಯಾವುದು? ಯಾರೆಲ್ಲ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು ಎಂಬ ಮಾಹಿತಿಯನ್ನು ತಿಳಿಯಲು ಈ ಲೇಖನ ಸಂಪೂರ್ಣವಾಗಿ ಓದಿ.

ಸಂಧ್ಯಾ ಸುರಕ್ಷಾ ಯೋಜನೆಯ ಸಂಪೂರ್ಣ ಮಾಹಿತಿಯ ವಿವರ:

ಹೌದು ಸ್ನೇಹಿತರೆ ಹಿರಿಯನಾಗರಿಕರಿಗೆಲ್ಲಾ ಸಂಧ್ಯಾ ಸುರಕ್ಷ ಯೋಜನೆಯ (Sandhya Suraksha Yojana) ಯನ್ನು ಸರ್ಕಾರವು ಜಾರಿಗೆ ತಂದಿದ್ದು ಮಾಸಿಕ ಅಂದರೆ ತಿಂಗಳ ಪಿಂಚಣಿ (Monthly Pension) ನ ರೂಪದಲ್ಲಿ ಹಿರಿಯನಾಗರಿಕರಿಗೆಲ್ಲಾ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಲ್ಲಾ ಹಿರಿಯನಾಗರಿಕರಿಗೆ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಈ ಸಂಧ್ಯಾ ಸುರಕ್ಷ ಯೋಜನೆಯನ್ನು ಸರ್ಕಾರದ ವತಿಯಿಂದ ಜಾರಿಗೆ ತರಲಾಗಿದೆ. ಆರ್ಥಿಕ ಸಂಕಷ್ಟದಿಂದ ಹಿರಿಯನಾಗರಿಕರನ್ನು ಪಾರು ಮಾಡುವ ಸಲುವಾಗಿ ಈ ಸಂಧ್ಯಾ ಸುರಕ್ಷಾ ಯೋಜನೆಯನ್ನು 2007 ರಲ್ಲಿ ಆರಂಭಿಸಲಾಯಿತು. ಹಲವು ಬಡ ವರ್ಗದ ಜನರೆಲ್ಲರು ಕೂಡ ಈ ಸೌಲಭ್ಯ ವನ್ನು ಪಡೆಯುತ್ತಿದ್ದಾರೆ.

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯನಾಗರಿಕರಿಗೆಲ್ಲಾ ಎಷ್ಟು ಹಣ ಸಿಗಲಿದೆ?

ಈ ಸಂಧ್ಯಾ ಸುರಕ್ಷ ಯೋಜನೆಯ ಮೂಲಕ 65 ವರ್ಷಗಳನ್ನು ಮೇಲ್ಪಟ್ಟ ಎಲ್ಲಾ ಹಿರಿಯನಾಗರಿಕರಿಗೆ ಪ್ರತಿ ತಿಂಗಳು ₹1,200 ರೂಪಾಯಿಗಳ ಮಾಸಾಶನವನ್ನು ನೀಡಲಾಗುತ್ತದೆ. ಈ ಒಂದು ಯೋಜನೆಯ ಮೂಲಕ ಹಿರಿಯನಾಗರಿಕರಿಗೆ ಮಾಸಿಕ ಪಿಂಚಣಿಯ ಜೊತೆಗೆ ವೈದ್ಯಕೀಯ ನೆರವುನ್ನೂ ಮತ್ತು ಬಸ್ ಪಾಸ್ ರಿಯಾಯಿತಿ ಇಂತಹ ಇತ್ಯಾದಿ ಸೌಲಭ್ಯಗಳನ್ನೆಲ್ಲಾ ಸಹಾ ಒದಗಿಸಲಿದೆ. ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಕೃಷಿ ಕಾರ್ಮಿಕರು, ಸಣ್ಣ ರೈತರು, ಹೀಗೆ ಇತರ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.

Sandhya Suraksha Yojana Apply Online

ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು:

  • ರೇಷನ್ ಕಾರ್ಡ್
  • ಆದಾಯ ಪ್ರಮಾಣಪತ್ರ
  • ವಯಸ್ಸಿನ ಮಾಹಿತಿ
  • ವಾಸಸ್ಥಳ ದೃಢೀಕರಣ ಪತ್ರ
  • ಚುನಾವಣಾ ಗುರುತಿನ ಚೀಟಿ
  • ಬ್ಯಾಂಕ್ ಪಾಸ್ ಬುಕ್ ಇತ್ಯಾದಿ.

ಸಂಧ್ಯಾ ಸುರಕ್ಷಾ ಯೋಜನೆಗೆ ಬೇಕಾದ ಅರ್ಹತೆಗಳು ಏನು?

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಮತ್ತು ಕರ್ನಾಟಕದಲ್ಲಿಯೆ ವಾಸವನ್ನು ಮಾಡುತ್ತಿರಬೇಕು.
ಅರ್ಜಿದಾರರಿಗೆ 65 ವರ್ಷ ವಯಸ್ಸಿನವರಾಗಿರಬೇಕು ಅಥವಾ 65 ವರ್ಷ ಮೇಲ್ಪಟ್ಟ ವರಾಗಿರಬೇಕು.
ಅರ್ಜಿದಾರರ ಹಾಗೂ ದಂಪತಿಗಳ ಒಟ್ಟು ವಾರ್ಷಿಕ ಆದಾಯವೂ ₹20,000 ರೂ. ಮೀರಿದ್ದರೆ ಅರ್ಜಿ ಹಾಕಬಾರದು.
ಖಾಸಗಿ ಅಥವಾ ಸಾರ್ವಜನಿಕ ಮೂಲದಿಂದ ಇತರ ಪಿಂಚಣಿಯನ್ನು ಪಡೆಯುತ್ತಿರುವ ಹಿರಿಯನಾಗರಿಕರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ಮನೆಯ ಹತ್ತಿರದ ಗ್ರಾಮ ಓನ್ ಅಥವಾ ಬೆಂಗಳೂರು ಒನ್ ಅಥವಾ ಪಂಚಾಯಿತಿ ಕಚೇರಿಗಳಲ್ಲಿ ವೃದ್ಧಾಪ್ಯ ವೇತನ ಪಿಂಚಣಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.ಈ ಸಂಧ್ಯಾ ಸುರಕ್ಷ ಯೋಜನೆಯ ಸೌಲಭ್ಯವನ್ನು ಪಡೆಯಲು ವಿವಿಧ ಸ್ಥಳಗಳಲ್ಲಿ ಸಹಾಯವಾಣಿಯನ್ನು ಸಹ ಸ್ಥಾಪಿಸಲಾಗಿದೆ ಈ ಸಹಾಯವಾಣಿಗಳ ನೆರವನ್ನು ಸಹ ಪಡೆಯ ಬಹುದಾಗಿದೆ. ಎಲ್ಲಾ ಅರ್ಜಿದಾರಿಗೆ ಆಫ್ಲೈನ್ ವಿಧಾನದಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ, ನಿಮ್ಮ ಪ್ರದೇಶದ ಪುರಸಭೆ ಕಚೇರಿಯಲ್ಲಿ ಅಥವಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅರ್ಜಿ ಹಾಕಬಹುದು

Leave a Comment