New Ration Card News: ಹೊಸ BPL ಪಡಿತರ ಕಾರ್ಡ್ಗಳ ಹಂಚಿಕೆಗೆ ಕ್ಷಣಗಣನೆ ಶುರುವಾಗಿದೆ.!! ಇಲ್ಲಿದೆ ನೋಡಿ ಗುಡ್ ನ್ಯೂಸ್.!!
ಹೊಸದಾಗಿ ರೇಷನ್ ಕಾರ್ಡ್ (Ration Card) ಅನ್ನು ಕೋರಿ ಅರ್ಜಿಯನ್ನು ಸಲ್ಲಿದ ಎಲ್ಲಾ ಸಮಸ್ತ ಜನತೆಗೆ ಶೀಘ್ರದಲ್ಲಿ ರಾಜ್ಯ ಸರ್ಕಾರವು ರೇಷನ್ ಕಾರ್ಡ್ (ಪಡೆತರ ಚೀಟಿ) ಯನ್ನು ವಿತರಣೆಯನ್ನು ಮಾಡಲು ಸಿದ್ದವಾಗಿದೆ. ಈ ವಿಷಯದ ಕುರಿತಂತೆ ಎಲ್ಲಾ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಲು ನೀವು ಈ ಲೇಖನವನ್ನು ಪೂರ್ತಿಯಾಗಿ ಕೊನೆಯವರೆಗೂ ಓದಿರಿ.
ಹೊಸ ರೇಷನ್ ಕಾರ್ಡ್ಗಳ ವಿತರಣೆಗೆ ಸಜ್ಜಾದ ರಾಜ್ಯ ಸರ್ಕಾರ:
ಈ ಹಿಂದೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಒಂದು ಕಾರಣದಿಂದಾಗಿ ರಾಜ್ಯದ ಜನತೆಗೆ ಹೊಸ ಪಡಿತರ ಚೀಟಿ (Ration Card) ನ ವಿತರಣೆಯನ್ನು ಸರ್ಕಾರವು ಸ್ಥಗಿತಗೊಳಿಸಿತ್ತು, ಕಳೆದ ಜೂನ್ ತಿಂಗಳ ಅಂತ್ಯಕ್ಕೆ ಒಟ್ಟು ಸುಮಾರು 2,95,986 ಅರ್ಜಿಗಳು ವಿತರಣೆ ಆಗದೆ ಹಾಗೇಬಾಕಿಯೇ ಉಳಿದಿವೆ. ಈ ಎಲ್ಲಾ ಅರ್ಜಿದಾರರುಗಳ ಸ್ಥಳವನ್ನು ಹಾಗೂ ವಿಳಾಸ ಮತ್ತು ಎಲ್ಲಾ ದಾಖಲೆಗಳನ್ನೂ ಕೂಡ ಪರಿಶೀಲಿಸಲಾಗುವುದು.
ಇದಾದ ಬಳಿಕವೇ ಎಲ್ಲಾ ಅರ್ಹರಾದ ಫಲಾನುಭವಿಗಳ ಸಂಪೂರ್ಣ ಮಾಹಿತಿಯನ್ನು ಆಯಾ ಜಿಲ್ಲೆಗಳಿಂದ ಪಡೆದುಕೊಂಡು ಅನಂತರವೇ ಆರ್ಥಿಕ ಹಣಕಾಸು ಇಲಾಖೆಯಿಂದ ಸರ್ಕಾರವು ಎಲ್ಲಾ ಅನುಮತಿಯನ್ನು ಪಡೆದುಕೊಂಡು ಹೊಸ ರೇಷನ್ ಕಾರ್ಡ್ ವಿತರಣೆಗೆ ಕ್ರಮವನ್ನೂ ಕೈಗೊಳ್ಳಲಾಗುವುದು. ತುರ್ತು ಕಾರಣಗಳಿಗೆ ಮತ್ತು ವೈದ್ಯಕೀಯ ಕಾರಣಗಳಿಗೆ ಮಾತ್ರ ಹೊಸ ಪಡಿತರ ಚೀಟಿಯ ವಿತರಣೆಗೆ ಸರ್ಕಾರವು ಅನುಮತಿಯನ್ನು ನೀಡಲಾಗುವುದು ಎಂಬ ಮಾಹಿತಿಯನ್ನು ಇತ್ತೀಚಿಗೆ ನಡೆದ ಒಂದು ಸುದ್ದಿಗೋಷ್ಠಿಯಲ್ಲಿ (Press Meet) ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ. ಹೆಚ್ ಮುನಿಯಪ್ಪ ಅವರು ಮಾತನಾಡಿದ್ದಾರೆ.
ಹೊಸ ರೇಷನ್ ಕಾರ್ಡ್ ಅನ್ನು (New Ration Card) ಕೋರಿ ಈಗಾಗಲೇ 2.95 ಲಕ್ಷ ಅರ್ಜಿಗಳನ್ನು ರಾಜ್ಯದ ಜನತೆ ಸಲ್ಲಿಕೆ ಮಾಡಿದೆ, ಸಲ್ಲಿಕೆಯಾದಂತಹ ಎಲ್ಲಾ ಅರ್ಜಿಗಳನ್ನು ಚ್ಚನ್ನಾಗಿ ಪರಿಶೀಲಿಸಿದ ನಂತರ ಶೀಘ್ರದಲ್ಲಿಯೇ ಎಲ್ಲಾ ಅರ್ಹರಾದ ಅರ್ಜಿದಾರರಿಗೆ ರೇಷನ್ ಕಾರ್ಡ್ ಫಲಾನುಭವಿಗಳ ಕೈ ಅನ್ನು ಸೇರಲಿದೆ, ಎಲ್ಲಾ ಅನರ್ಹ BPL ಕಾರ್ಡ್ಗಳನ್ನು ಕೈಬಿಟ್ಟು ರದ್ದುಗೊಳಿಸಿ ನಂತರ ಅರ್ಹವಾದ ಫಲಾನುಭವಿಗಳಿಗೆ ಅವರ ಬಿಪಿಎಲ್ ಪಡಿತರ ಕಾರ್ಡ್ಗಳನ್ನು ಒದಗಿಸಲು ಸರ್ಕಾರವು ವೇಗವಾಗಿ ಕ್ರಮವನ್ನು ಕೈಗೊಳ್ಳಲು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಎಲ್ಲಾ ಸಂಭಂದಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂಥವರ BPL ರೇಷನ್ ಕಾರ್ಡ್ಗಳು ಬಹುಬೇಗ ರದ್ದಾಗಲಿದೆ:
ಈಗ ಇರುವ ಎಲ್ಲಾ ಅನರ್ಹವಾದ BPL ರೇಷನ್ ಕಾರ್ಡುಗಳನ್ನು ಬೇಗನೆ ರದ್ದು ಪಡಿಸಿ, ಅನಂತರ ಅರ್ಹರಿಗೆ BPL ರೇಷನ್ ಕಾರ್ಡ್ ಗಳನ್ನು ಒದಗಿಸಬೇಕು ಎಂಬ ಮಾಹಿತಿಯನ್ನು ರಾಜ್ಯದ ಸಿಎಂ ಸಿದ್ದರಾಮಯ್ಯನವರು ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದಾರೆ. ಯಾರಾದರು ಅನರ್ಹರು ಬಿಪಿಎಲ್ ಪಡಿತರ ಕಾರ್ಡ್ ಅನ್ನು ಪಡೆದಿದ್ದರೆ ಅಂತಹ ಅವರ ಬಗ್ಗೆ ಎಲ್ಲಾ ಅಧಿಕಾರಿಗಳು ಮನೆಗೆ ತೆರಳಿ ಪರಿಶೀಲನೆಎನ್ನು ನಡೆಸುತ್ತಿದ್ದಾರೆ.
ಈ ರೀತಿಯ ರೇಷನ್ ಕಾರ್ಡ್ಗಳು ಏನಾದರೂ ಪತ್ತೆಯಾದ್ದಲ್ಲಿ ಅವುಗಳನ್ನು ಕೂಡಲೇ ರದ್ದುಪಡಿಸಲಾಗುವುದು. ಇದರ ಜೊತೆಗೆನೇ, ಸರ್ಕಾರ ಎಲ್ಲಾ ಜನತೆಗೆ ನೀಡುವ ಪಡಿತರ ಅಕ್ಕಿಯ ದುರುಪಯೋಗವಾದಂತೆ ಕಠಿಣ ಕ್ರಮವನ್ನೂ ಕೈಗೊಳ್ಳುತ್ತೇವೆ. ಇಂತಹ ದೂರುಗಳು ಏನಾದರು ಕಂಡು ಬಂದಲ್ಲಿ ಅಂತಹ ಜಾಗದಲ್ಲಿ ತನಿಖೆ ಮಾಡಿಸಿ ನಂತರ ಅವರ BPL ಕುಟುಂಬಗಳಲ್ಲಿ ಇರುವ ಮೃತ ಸದಸ್ಯರುಗಳ ಹೆಸರನ್ನು ರೇಷನ್ ಕಾರ್ಡ್ ನಿಂದ ರದ್ದು ಪಡಿಸುವ ಪ್ರಕ್ರಿಯೆಯನ್ನು ತುರ್ತಾಗಿ ಸರ್ಕಾರವು ಕೈಗೊಳ್ಳುತ್ತದೆ. ಜನರನ್ನು ಅನಗತ್ಯವಾಗಿ ಅಲೆದಾಡಿಸಬಾರದು.
ಇತರೆ ವಿಷಯಗಳು: